Media Release
Photos : Stanly Bantwal
Mangaluru, June 13, 2021 :St Anthony Ashram Jeppu distributes food kits to the media people and the needy on the occasion of annual feast of St. Anthony.
ಸಂತ ಆಂತೋನಿ ಆಶ್ರಮದ ವತಿಯಿಂದ ಅರ್ಹರಿಗೆ ಆಹಾರ ಕಿಟ್ ವಿತರಣೆ
ಮುಂಬಯಿ (ಆರ್ಬಿಐ), ಜೂ. 13 : ಇಂದಿಲ್ಲಿ (ಬಾನುವಾರ) ಮಂಗಳೂರು ಜೆಪ್ಪು ಇಲ್ಲಿನ ಸಂತ ಆಂತೋನಿ ಅವರ ಆಶ್ರಮದಲ್ಲಿ ವಾರ್ಷಿಕ ಹಬ್ಬ ಸಂಭ್ರಮಿಸಲಾಯಿತು. ಆ ಪ್ರಯುಕ್ತ ಸಂಜೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ (ಬಿಷಪ್) ಅತೀ ವಂ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಪತ್ರಕರ್ತರಿಗೆ ಮತ್ತು ಅರ್ಹರಿಗೆ ಆಹಾರ-ಧಾನ್ಯದ ಕಿಟ್ ವಿತರಿಸಿ ಹರಸಿದರು.
ಸ್ಟೇನ್ಲಿ ಬಂಟ್ವಾಳ್ (ಬಿಕರ್ಣಕಟ್ಟೆ) ಇವರು ಕಿಟ್ ವಿತರಣಾ ನೇತೃತ್ವ ವಹಿಸಿದ್ದರು. ಫಾ| ರೋಶನ್, ಡಿಕೆಕೆಡಬ್ಲ್ಯೂ ಜೆಎಸ್ ಕೇಂದ್ರ ಸಮಿತಿ ಸದಸ್ಯ ಬಾಳ ಜಗನ್ನಾಥ್ ಶೆಟ್ಟಿ ಮತ್ತಿತರ ಪತ್ರಕರ್ತರು ಉಪಸ್ಥಿತರಿದ್ದು ಜೆಪ್ಪು ಸಂತ ಆಂತೋನಿ ಆಶ್ರಮದ ನಿರ್ದೇಶಕ ರೆ| ಫಾ| ಒನಿಲ್ ಡಿಸೋಜ ಸ್ವಾಗತಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಂದಿಸಿದರು.
Comments powered by CComment